ಉದ್ದದಾಡಿಯ ಕೆಂಗಣ್ಣಿನ
ಮಂತ್ರವಾದಿ ಇದ್ದಾನೆ
ಹಾಗೆಯೇ, ಅದೆಷ್ಟೊ ವರ್ಷಗಳಿಂದ
ಮುಪ್ಪಿಲ್ಲ ಸಾವಿಲ್ಲ
ಕುಡಿದು ಬಿಟ್ಟಿದ್ದಾನೆ
ದೇವಲೋಕದ ಅಮೃತ
ಏಳು ಸಾಗರದಾಚೆ ಅದೆಲ್ಲಿಯೋ
ಉಸಿರಾಡುತ್ತಿದೆಯಂತೆ ಪ್ರಾಣಪದಕ
ಹುಡುಕಿ ಕೊಲ್ಲಲಾರದೆ, ನರಳಿವೆ
ನರಳುತ್ತಲೇ ಇವೆ ಮೈ ಮನಸ್ಸು
ಹುಡುಕ ಹೊರಟ ಧೀರರ
ಹಾದಿ ಸಾಗುವುದೇ ಇಲ್ಲಾ
ಮಂತ್ರವಾದಿಯ ಪ್ರಾಣ ಪದಕ
ದಕ್ಕುವುದೇ ಇಲ್ಲ
ಹಿಡಿಯೊಳಗೆ ಪ್ರಾಣ
ಉಡಿಯೊಳಗೆ ತ್ರಾಣ
ಕ್ರೂರತೆಯ ಅಟ್ಟಹಾಸ
ಸಾವಿಲ್ಲದ ವಿಕಟಟ್ಟಾಹಾಸ
ಬೆಟ್ಟಗುಡ್ಡ ನೆಲದಲ್ಲೆಲ್ಲ
ಹುಡುಕಾಟವೇ ಹುಡುಕಾಟ
ಸಿಕ್ಕಿದವರಿಗೆಲ್ಲ ವಶೀಕರಣದ ಕಾಟ
ದಕ್ಕುವ ತನಕ ಗಿಳಿ ಮಾಡುವ
ಕಾಯಕ
ಕೆಂಪು ಕೊಕ್ಕಿನ ಮುದ್ದುಗಿಳಿಗೆ
ಪಂಜರವೇ ನಿತ್ಯ
ಕೊನೆಗೆ ಎಲ್ಲವೂ ಅಪಥ್ಯ
ರೆಕ್ಕೆ ಪುಕ್ಕ ಕತ್ತಿರಿಸಿದ ಗಿಳಿ
ಈಗ ಮಂತ್ರವಾದಿಯ ಬಳಿ
ಸಾವಿಲ್ಲದ ಮನೆಯ ಸಾಸುವೆ
ಉಂಟು ಇಲ್ಲಿ
ಸತ್ತರೂ ಸಾಯಲಾರದ
ಜೀವವಿದ್ದರೂ, ಜೀವಂತಿಕೆ ಇಲ್ಲದ
ಸಾವಿರಾರು ಗಿಳಿಗಳ ಹಿಂಡು,
ನರಳುತ್ತಲೇ ಇವೆ ಅಲ್ಲಿ
*****
Related Post
ಸಣ್ಣ ಕತೆ
-
ಹೃದಯ ವೀಣೆ ಮಿಡಿಯೆ….
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಒಂಟಿ ತೆಪ್ಪ
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…